Slide
Slide
Slide
previous arrow
next arrow

ಕದಂಬೋತ್ಸವ: ಡಿಸಿ ಜೊತೆ ಮೈದಾನ ಪರಿಶೀಲಿಸಿದ ಶಾಸಕ ಹೆಬ್ಬಾರ್

300x250 AD

ಬನವಾಸಿ: ಇಲ್ಲಿಯ ಕದಂಬೋತ್ಸವ ನಡೆಯುವ ಮೈದಾನಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಹಾಗೂ  ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಬುಧವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ಫೆ.24 ಮತ್ತು ಫೆ.25ರಂದು ಕದಂಬೋತ್ಸವ ಮತ್ತು ಪಂಪ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಘೋಷಣೆಯಾಗಿರುವ ಪ್ರಯುಕ್ತ ಕೈಗೊಳ್ಳಬೇಕಾದ  ತಯಾರಿಯ ಬಗ್ಗೆ ಅಧಿಕಾರಿಗಳೊಂದಿಗೆ ಮೊದಲ ಹಂತದಲ್ಲಿ ಸಮಾಲೋಚನೆ ನಡೆಸಲಾಗಿದೆ. ಕದಂಬೋತ್ಸವ ಕಾರ್ಯಕ್ರಮದ ಸಿದ್ದತೆಯಾಗಿದ್ದು ಅನುದಾನದ ಕೊರತೆ ಎದುರಾಗುವುದಿಲ್ಲ. ಪ್ರತಿ ವರ್ಷದಂತೆ ಕದಂಬೋತ್ಸವದ ಘನತೆಗೆ ಯಾವುದೇ ರೀತಿಯ ಲೋಪದೋಷಗಳು ಎದುರಾಗದಂತೆ ಉತ್ಸವವನ್ನು ಅದ್ದೂರಿಯಾಗಿ ನಡೆಸುವುದು ಸರ್ಕಾರ ಹಾಗೂ ನಮ್ಮ ಒತ್ತಾಸೆಯಾಗಿದೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಕಾರ್ಯಕ್ರಮ ಜರುಗುವ  ವೇದಿಕೆಯನ್ನು ಈಗಾಗಲೇ ವಿಸ್ತರಿಸಲಾಗಿದೆ.   ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಬೇಕಾಗಿರುವ ಕೆಲಸ ತ್ವರಿತ ಗತಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದರು.

ಈ ಸಂದರ್ಭದಲ್ಲಿ  ಶಿರಸಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ಶಿರಸಿ  ತಹಶೀಲ್ದಾರ ಶ್ರೀಧರ ಮುಂದಲಮನಿ, ಪ್ರಭಾರಿ  ಉಪ ತಹಶೀಲ್ದಾರ ಅಣ್ಣಪ್ಪ ಮಡಿವಾಳ, ಪಿಡಬ್ಯುಡಿ ಅಭಿಯಂತರ ಭಾನುಪ್ರಕಾಶ್, ನಿರ್ಮಿತಿ ಅಭಿಯಂತರ ಕುಮಾರ್, ಎಇಇ ಅನೀಲ್ ಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತ ಛಲವಾದಿ,   ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾನ್, ಉಪಾಧ್ಯಕ್ಷ ಸಿದ್ದವೀರೇಶ ನೆರಗಲ್ ಹಾಗೂ ಪುರಾತತ್ವ, ಕಂದಾಯ,  ಶಿಕ್ಷಣ, ನಗರಸಭೆ, ಗ್ರಾಮ ಪಂಚಾಯತಿ, ಪೋಲಿಸ್ ಇಲಾಖೆಯ ಅಧಿಕಾರಿಗಳು, ಮುಖಂಡರು ಇದ್ದರು.

300x250 AD

ಕೋಟ್:
ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನ ಸೋರುವಿಕೆಯ ದುರಸ್ತಿ ಕಾಮಗಾರಿಗೆ ಪುರಾತತ್ವ ಇಲಾಖೆ 50ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಶೀಘ್ರದಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಉಳಿದ  ಅಭಿವೃದ್ಧಿ ಕಾಮಗಾರಿಯನ್ನು ಮುಂದಿನ ವರ್ಷ ನಡೆಸಲಾಗುತ್ತದೆ.– ಗಂಗೂಬಾಯಿ ಮಾನಕರ್ ಜಿಲ್ಲಾಧಿಕಾರಿ

Share This
300x250 AD
300x250 AD
300x250 AD
Back to top